ಮೂವರು ಮಕ್ಕಳನ್ನು ಹಂಡೆ, ಬಕೆಟ್, ಟ್ಯಾಂಕಿನಲ್ಲಿ ಮುಳುಗಿಸಿ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ! | Janata news
ಕೊಪ್ಪಳ : ಕೂಕುನೂರು ತಾಲೂಕಿನ ಯರೇ ಹಂಚಿನಾಳ ಗ್ರಾಮದಲ್ಲಿ ಸೋಮವಾರ ತಡರಾತ್ರಿ ತಾಯಿಯೊಬ್ಬಳು ಮೂವರು ಮಕ್ಕಳನ್ನು ಕೊಂದು, ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.
ಹಿರಿಯ ಮಗಳದ ಅಕ್ಷತಾಳನ್ನು(6ವರ್ಷ) ನೀರು ತುಂಬಿಸುವ ಹಂಡೆಯಲ್ಲಿ ಮುಳುಗಿಸಿ, ಕಾವ್ಯಳನ್ನು (4 ವರ್ಷ) ನೀರಿನ ಟ್ಯಾಂಕಿಯಲ್ಲಿ ಮುಳುಗಿಸಿ ಮತ್ತು ಮಗ ನಾಗರಾಜನನ್ನು (2ವರ್ಷ) ನೀರಿರುವ ಬಕೆಟ್ ನಲ್ಲಿ ಮುಳುಗಿಸಿ ಸಾಯಿಸಿದ್ದಾಳೆ. ನಂತರ ಯಲ್ಲಮ್ಮ ಬಾರಕೇರ (28) ತಾನೂ ಮನೆಯಲ್ಲೇ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
English summary :Sucide