Sat,May30,2026
ಕನ್ನಡ / English

ಅಧಿಕಾರಿಗಳ ಕಿರುಕುಳ ​​ತಾಳಲಾರದೆ ಶಿಕ್ಷಕ ಆತ್ಮಹತ್ಯೆ! | JANATA NEWS

13 Feb 2023

ವಿಜಯಪುರ : ನನಗಿಂತಲೂ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಎಂದು ಡೆತ್​ನೋಟ್ ಬರೆದಿಟ್ಟು ಸಿಂದಗಿ ತಹಶೀಲ್ದಾರ್ ಕಚೇರಿಯ ಆವರಣದ ಮರಕ್ಕೆ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಸಾಬಳ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ್ (55) ಆತ್ಮಹತ್ಯೆಗೆ ಶರಣಾದವರು. ಶಿಕ್ಷಕ ಡೆತ್ ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಾಲೆಯ ಹಿಂದಿನ ಮುಖ್ಯ ಶಿಕ್ಷಕ ಎಸ್.ಎಲ್.ಭಜಂತ್ರಿ, ಸಿಂದಗಿ ಬಿಇಓ, ಸಿಆರ್​ಪಿ ಜಿ.ಎನ್.ಪಾಟೀಲ್ ಅವರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖ ಮಾಡಿದ್ದಾರೆ.

ಡೆತ್​ ನೋಟ್​ನಲ್ಲಿ ಏನಿದೆ?

ಎಸ್​ ಎಲ್ ಭಜಂತ್ರಿ ಮುಖ್ಯಶಿಕ್ಷಕ ಹುದ್ದೆಯನ್ನು, ಶಿಕ್ಷಕ ಬಸವರಾಜಗೆ ವರ್ಗಾಯಿಸಿದ್ದರು. ಈ ವೇಳೆ ಶಿಕ್ಷಕರ, ಹಾಗೂ ಮಕ್ಕಳ ಹಾಜರಾತಿ ದಾಖಲಿಸುವ 1ನೇ ನಂಬರ್ ರಿಜಿಸ್ಟರ್​ನ್ನು ಹಸ್ತಾಂತರ ಮಾಡಿದ್ದರು. ಆದರೆ ಭಜಂತ್ರಿ ವಿದ್ಯಾರ್ಥಿಗಳ ದಾಖಲಾತಿ ವಿವರ, ಜಾತಿ, ಜನ್ಮ ದಿನಾಂಕಗಳನ್ನು 1ನೇ ನಂಬರ್ ರಿಜಿಸ್ಟರ್​ ಸರಿಯಾಗಿ ದಾಖಲಿಸದೇ,​ ಅಪೂರ್ಣ ರೀತಿಯಲ್ಲಿ ವರ್ಗಾಯಿಸಿದ್ದರು.

ಈ ಸಂಬಂಧ ಎಸ್​ ಎಲ್ ಭಜಂತ್ರಿಯನ್ನು, ಶಿಕ್ಷಕ ಬಸವರಾಜ್​ ಪ್ರಶ್ನಿಸಿದರೇ “ನಾನು ಸಿಆರ್​ಪಿ ಆಗುತ್ತೇನೆ, ಆಗಾಗ ಬಂದು 1ನೇ ನಂಬರ್ ರಿಜಿಸ್ಟರ್ ಸರಿಪಡಿಸುವುದಾಗಿ ಹೇಳಿದ್ದರು. ಆದರೆ ಹಿಂದಿನ ಮುಖ್ಯ ಶಿಕ್ಷಕ ಎಸ್ ಎಲ್ ಭಜಂತ್ರಿ ರಿಜಿಸ್ಟರ್​ನ್ನು ಸರಿಪಡಿಸದೇ ಸತಾಯಿಸುತ್ತಿದ್ದರು. ಈ ಬಗ್ಗೆ ಸಿಂದಗಿ ಬಿಇಓ ಗಮನಕ್ಕೂ ತಂದಿದ್ದರೂ ಪ್ರಯೋಜನವಾಗಿಲ್ಲ. ಇದಕ್ಕೆ ಪ್ರತಿಯಾಗಿ ಬಿಇಓ ಹೆಚ್ ಎಂ ಹರಿನಾಳ ಟಾರ್ಚರ್ ನೋಟಿಸ್ ಕೊಡುತ್ತಿದ್ದನು. ಸಾಸಾಬಳ ಶಾಲೆಯ ಸಹಶಿಕ್ಷಕ ಶಿಕ್ಷಕ ಬಿಎಂ ತಳವಾರ ನಿಂದಲೂ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.

ಅಲ್ಲದೇ ನನ್ನ ಮೇಲೆ ಅಲಿಗೆಷನ್ ಮಾಡಿ, ಗ್ರಾಮದ ಸಂಗಮೇಶ್ ಚಿಂಚೋಳಿ ಎಂಬುವರು ಹಾಗೂ ಸಿಆರ್​ಪಿ ​​ನನ್ನಿಂದ ಹಣ ಪಡೆದಿದ್ದರು. ಹಾಗೇ ಬಿಸಿಯೂಟ ಯೋಜನೆಯಗೆ ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ತೋರಿಸಿ ಹಣ ಲಪಟಾಯಿಸುತ್ತಿದ್ದರು. ಶಿಕ್ಷಕ ಬಸವರಾಜ್ ವಿರುದ್ಧ ಸಂಗಮೇಶ್ ಚಿಂಚೋಳಿ ಬಿಇಓಗೆ ದೂರು ಕೊಟ್ಟಿದ್ದರು. ನನಗಿಂತಲೂ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ನನ್ನ ಹೆಂಡತಿ ಓರ್ವ ಮಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಡೆತ್ ನೋಟ್​​ನಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಡೆತ್ ನೋಟಿನಲ್ಲಿ ಬಸವರಾಜ ಉಲ್ಲೇಖಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಹರನಾಳ, ಜಿ.ಎನ್ ಪಾಟೀಲ, ಎಸ್.ಎಲ್.ಬಜಂತ್ರಿ, ಸಂಗಮೇಶ ಚಿಂಚೊಳ್ಳಿ, ಎಸ್.ಎಲ್.ಬಜಂತ್ರಿ, ಬಿ.ಎಂ.ತಳವಾರ ಅವರುಗಳೇ ನನ್ನ ಗಂಡನ ಸಾವಿಗೆ ನೇರ ಕಾರಣ ಎಂದು ಪತ್ನಿ ಮಹಾದೇವಿ ಬಸವರಾಜ ನಾಯಕಲ್ ಸಿಂದಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED TOPICS:
English summary :Unable to bear the harassment of the authorities, the teacher committed suicide

ಕೇರಳ ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡದ ಕಾರಣ ಗದ್ದಲ
ಕೇರಳ ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡದ ಕಾರಣ ಗದ್ದಲ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿ, ಮಂತ್ರಿಮಂಡಲ ವಜಾ ಮಾಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿ, ಮಂತ್ರಿಮಂಡಲ ವಜಾ ಮಾಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಅರ್ಮೇನಿಯಾ ಮಿಲಿಟರಿ ಮೆರವಣಿಗೆಯಲ್ಲಿ ಭಾರತೀಯ ಮೂಲದ ಫಿರಂಗಿ, ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಪ್ರದರ್ಶನ
ಅರ್ಮೇನಿಯಾ ಮಿಲಿಟರಿ ಮೆರವಣಿಗೆಯಲ್ಲಿ ಭಾರತೀಯ ಮೂಲದ ಫಿರಂಗಿ, ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಪ್ರದರ್ಶನ
ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆಯನ್ನು ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆಯನ್ನು ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
3 ಗಂಟೆಗೆ ರಾಜೀನಾಮೆ ನೀಡಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ : ಡಿಕೆ ಶಿವಕುಮಾರ್ ಹೊಸ ಸಿಎಂ
3 ಗಂಟೆಗೆ ರಾಜೀನಾಮೆ ನೀಡಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ : ಡಿಕೆ ಶಿವಕುಮಾರ್ ಹೊಸ ಸಿಎಂ
ಅಂತಾರಾಷ್ಟ್ರೀಯ ಗಡಿಗಳ ಬಳಿಯ ಅಕ್ರಮ ರಚನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅಮಿತ್ ಶಾ ಆದೇಶ
ಅಂತಾರಾಷ್ಟ್ರೀಯ ಗಡಿಗಳ ಬಳಿಯ ಅಕ್ರಮ ರಚನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅಮಿತ್ ಶಾ ಆದೇಶ
ಅಸ್ಸಾಂ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ ಮಸೂದೆ, 2026 ಅನ್ನು ಅಂಗೀಕರಿಸಿದೆ
ಅಸ್ಸಾಂ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ ಮಸೂದೆ, 2026 ಅನ್ನು ಅಂಗೀಕರಿಸಿದೆ
ಕರ್ನಾಟಕದಲ್ಲಿ ಶೀಘ್ರದಲ್ಲೇ ಹೊಸ ಸಿಎಂ ಮತ್ತು ನಾಲ್ವರು ಡಿಸಿಎಂಗಳ ನೇಮಕ ಸಾಧ್ಯತೆ?
ಕರ್ನಾಟಕದಲ್ಲಿ ಶೀಘ್ರದಲ್ಲೇ ಹೊಸ ಸಿಎಂ ಮತ್ತು ನಾಲ್ವರು ಡಿಸಿಎಂಗಳ ನೇಮಕ ಸಾಧ್ಯತೆ?
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಟ ರಣವೀರ್ ಸಿಂಗ್ ಪ್ರಾರ್ಥನೆ ಸಲ್ಲಿಸಿದರು.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಟ ರಣವೀರ್ ಸಿಂಗ್ ಪ್ರಾರ್ಥನೆ ಸಲ್ಲಿಸಿದರು.
ಪೋರ್ಟಲ್‌ನಲ್ಲಿ ವಕ್ಫ್ ಮಂಡಳಿ ಅಕ್ರಮವಾಗಿ ಅಪ್‌ಲೋಡ್ ಮಾಡಲಾದ ಆಸ್ತಿಗಳನ್ನು ತೆಗೆದುಹಾಕಲು ಕೇಂದ್ರಕ್ಕೆ ರಾಜೀವ್ ಚಂದ್ರಶೇಖರ್ ಮನವಿ
ಪೋರ್ಟಲ್‌ನಲ್ಲಿ ವಕ್ಫ್ ಮಂಡಳಿ ಅಕ್ರಮವಾಗಿ ಅಪ್‌ಲೋಡ್ ಮಾಡಲಾದ ಆಸ್ತಿಗಳನ್ನು ತೆಗೆದುಹಾಕಲು ಕೇಂದ್ರಕ್ಕೆ ರಾಜೀವ್ ಚಂದ್ರಶೇಖರ್ ಮನವಿ
ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ: 3ನೇ ಸ್ಥಾನದಲ್ಲಿ ಆಸೀನರಾಗಿದ್ದ ಎಚ್‌ಡಿ ಕುಮಾರಸ್ವಾಮಿ
ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ: 3ನೇ ಸ್ಥಾನದಲ್ಲಿ ಆಸೀನರಾಗಿದ್ದ ಎಚ್‌ಡಿ ಕುಮಾರಸ್ವಾಮಿ
ತನ್ನ ಸ್ವಂತ ತಂದೆಗೆ ನಿಷ್ಠೆ ತೋರದ ಮಗ ದೇಶಕ್ಕೆ ನಿಷ್ಠನಾಗಿರುತ್ತಾನೆಯೇ? - ರಾಹುಲ್ ಗಾಂಧಿ ಸಮಗ್ರತೆ ಪ್ರಶ್ನಿಸಿದ ಎಸ್.ಜೈಶಂಕರ್
ತನ್ನ ಸ್ವಂತ ತಂದೆಗೆ ನಿಷ್ಠೆ ತೋರದ ಮಗ ದೇಶಕ್ಕೆ ನಿಷ್ಠನಾಗಿರುತ್ತಾನೆಯೇ? - ರಾಹುಲ್ ಗಾಂಧಿ ಸಮಗ್ರತೆ ಪ್ರಶ್ನಿಸಿದ ಎಸ್.ಜೈಶಂಕರ್

ನ್ಯೂಸ್ MORE NEWS...