Wed,Apr15,2026
ಕನ್ನಡ / English

ರಾತ್ರಿ ಮಟನ್ ತಿಂದು, ಹಗಲಿನಲ್ಲಿ ನಾನ್ ವೆಜಿಟೇರಿಯನ್​ಗೆ ಬೈತಾರೆ: ಖರ್ಗೆ ಲೇವಡಿ | JANATA NEWS

03 May 2023

ಕಲಬುರಗಿ : ರಾತ್ರಿ ಚೆನ್ನಾಗಿ ಮಟನ್ ತಿಂದು, ಬೆಳಗ್ಗೆ ಆದ ಕೂಡಲೇ ನಾನ್ ವೆಜ್ ತಿನ್ನೋರ ಬಗ್ಗೆ ಕೆಟ್ಟದಾಗಿ ಮಾತನಾಡೋದು ಹಾಗೂ ಅವರ ಮೇಲೆ ಎಗರಾಡೋರು ನೀವು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.

ಬಜರಂಗದಳ ರದ್ದು ವಿಚಾರ ಕುರಿತು ಮಾತನಾಡಿ, ಅದರ ಬಗ್ಗೆ ಪ್ರಣಾಳಿಕೆ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಆ ಕುರಿತು ಚರ್ಚೆ ಮಾಡಲು ಹೋಗಲ್ಲ ಎಂದು ತಿಳಿಸಿದರು.

ಬಿಜೆಪಿಯವರು ರಾತ್ರಿ ಹೊತ್ತಿನಲ್ಲಿ ಮಟನ್ ತಿಂದು ಬೆಳಗ್ಗೆ ಎದ್ದ ನಂತರ ನಾನ್ ವೆಬ್ ತಿನ್ನೋವರನ್ನು ಬೈಯ್ಯುತ್ತಾರೆ. ದಿನವಿಡೀ ಮಾಂಸಾಹಾರಿಗಳನ್ನು ಬೈಯ್ಯುವುದೇ ಇವರ ಕೆಲಸವಾಗಿರುತ್ತದೆ. ಆದರೆ, ರಾತ್ರಿ ಹೊತ್ತು ಅವರೇ ನಾನ್ ವೆಜ್ ಚೆನ್ನಾಗಿ ತಿನ್ನುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಬಿಜೆಪಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಪ್ರತಿ ವಿರೋಧ ಪಕ್ಷದವರು ಸಹಜವಾಗಿ ಒಬ್ಬರ ಮೇಲೆ ಒಬ್ಬರು ಹೇಳ್ತಾರೆ. ಅದೇ ರೀತಿ ಕಾಂಗ್ರೆಸ್ ಪ್ರಣಾಳಿಕೆ ಜಾರಿ ಮಾಡಲು ಆಗಲ್ಲಾ ಅಂತ ಹೇಳ್ತಿದ್ದಾರೆ. ಕಳೆದ ಬಾರಿ ಕೂಡಾ ಇದೇ ರೀತಿ ಹೇಳಿದ್ದರು. ಆದರೆ ಕಳೆದ ಬಾರಿ ನಾವು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿದ್ದೆವು. ಬಜೆಟ್ ಅನುದಾನ, ಆದಾಯ ನೋಡಿಯೇ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಅವರು ಹೇಳ್ತಾ ಹೋಗ್ತಾರೆ. ಆದರೆ ನಾವು ಮಾಡಿ ತೋರಿಸುತ್ತಿದ್ದೇವೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.

ಇದೇ ವೇಳೆ, ಸಂಘಪರಿವಾರದ ನಾಯಕರ ವರ್ತನೆಯ ಬಗ್ಗೆ ಅಸಮಾಧಾನ ಹೊರಹಾಕಿದ ಖರ್ಗೆ, ಕಾಂಗ್ರೆಸ್ ಏನೇ ಹೇಳಿದರೂ ಅದನ್ನು ತಿರುಚಿಕೊಂಡು ಅದಕ್ಕೆ ಬೇರೊಂದು ಬಣ್ಣ ಹಚ್ಚುವುದೇ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ಕೆಲಸವಾಗಿದೆ. ಈಗ ಭಜರಂಗದಳದ ವಿಚಾರದಲ್ಲೂ ಹಾಗೇ ಆಗುತ್ತಿದೆ ಎಂದರು

ಕೆಲವರಿಗೆ ಪ್ರಚಾರ ಬೇಕು, ಪ್ರಚಾರದಿಂದಲೇ ಎಲ್ಲಾ ಸಿಗುತ್ತೆ ಅಂತ ಅಂದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಚುನಾವಣೆ ಅನ್ನೋದು ವಾರ್ ಇದ್ದಂತೆ. ನನಗೆ ಹಿಂಗ ಅಂದ್ರು ಹಂಗ ಅಂದ್ರು ಅಂತ ಅಳುತ್ತಾ ಕೂತುಕೋದಿಲ್ಲಾ. ಇದೇ ಬಿಜೆಪಿಯವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ?. ಮುಂಜಾನೆ ಯಿಂದ ಸಂಜೆವರಗೆ ಅಳ್ತಾನೇ ಇರೋದು ಪ್ರಧಾನಿ ಕೆಲಸನಾ?. ನಾನು ಮೋದಿಗಿಂತ ಜಾತಿ ವ್ಯವಸ್ಥೆ ಯಲ್ಲಿ ಕೆಳಗೆ ಇದ್ದೀನಿ. ನಾನು ದಲಿತ ಜಾತಿಗೆ ಸೇರಿದವನು. ಮೋದಿ ಮತ್ತು ಶಾ ಅವರು ಯಾವ ರಾಜ್ಯಕ್ಕೆ ಎಷ್ಟು ಸಲ ಹೋಗಿದ್ದಾರೆ. ಅವರು ಹಣಬಲ, ಮಜಲ್ ಪವರ್ ಹೊಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

RELATED TOPICS:
English summary :Eat mutton at night, feed non-vegetarians during the day: Kharge teases

ಪ್ರಧಾನಿ ಮೋದಿ ಗೆ ದೂರವಾಣಿ ಕರೆ ಮಾಡಿ 40 ನಿಮಿಷ ಮಾತನಾಡಿದ ಅಧ್ಯಕ್ಷ ಟ್ರಂಪ್
ಪ್ರಧಾನಿ ಮೋದಿ ಗೆ ದೂರವಾಣಿ ಕರೆ ಮಾಡಿ 40 ನಿಮಿಷ ಮಾತನಾಡಿದ ಅಧ್ಯಕ್ಷ ಟ್ರಂಪ್
ಹೆಬ್ಬಾಳದಲ್ಲಿ 55 ಎಕರೆ ಭೂಮಿ ಖಾಸಗಿ ಸಂಸ್ಥೆಗೆ ವರ್ಗಾವಣೆ ರದ್ದುಗೊಳಿಸಿದ ಹೈಕೋರ್ಟ್ : ಸಿಬಿಐ ತನಿಖೆಗೆ ಆದೇಶ
ಹೆಬ್ಬಾಳದಲ್ಲಿ 55 ಎಕರೆ ಭೂಮಿ ಖಾಸಗಿ ಸಂಸ್ಥೆಗೆ ವರ್ಗಾವಣೆ ರದ್ದುಗೊಳಿಸಿದ ಹೈಕೋರ್ಟ್ : ಸಿಬಿಐ ತನಿಖೆಗೆ ಆದೇಶ
ಟಿಸಿಎಸ್ ನಲ್ಲಿ ಪಿಓಎಸ್ಎಚ್(ಪೊಶ್) ಆಡಿಟ್ ಕೋರಿದ ಎನ್ಐಟಿಇಎಸ್ : ಐಟಿ ವಲಯದಾದ್ಯಂತ ವ್ಯಾಪಕ ತನಿಖೆಗೆ ಒತ್ತಾಯ
ಟಿಸಿಎಸ್ ನಲ್ಲಿ ಪಿಓಎಸ್ಎಚ್(ಪೊಶ್) ಆಡಿಟ್ ಕೋರಿದ ಎನ್ಐಟಿಇಎಸ್ : ಐಟಿ ವಲಯದಾದ್ಯಂತ ವ್ಯಾಪಕ ತನಿಖೆಗೆ ಒತ್ತಾಯ
 ಟಿಸಿಎಸ್ ನಾಸಿಕ್ ಪ್ರಕರಣ: ಕಾರ್ಯಾಚರಣೆ ಮುಖ್ಯಸ್ಥ ಕಸ್ಟಡಿಗೆ ; ಟಾಟಾ ಇಂದ ಆಂತರಿಕ ತನಿಖೆ ವಿಸ್ತರಣೆ
ಟಿಸಿಎಸ್ ನಾಸಿಕ್ ಪ್ರಕರಣ: ಕಾರ್ಯಾಚರಣೆ ಮುಖ್ಯಸ್ಥ ಕಸ್ಟಡಿಗೆ ; ಟಾಟಾ ಇಂದ ಆಂತರಿಕ ತನಿಖೆ ವಿಸ್ತರಣೆ
ಜನರ ಹೆಸರುಗಳನ್ನು ಅಂತಿಮ ತೀರ್ಪಿನ ನಂತರ ಸೇರಿಸಿದರೆ... ಮತ ಚಲಾಯಿಸಲು ಅವಕಾಶ - ಸುಪ್ರೀಂ
ಜನರ ಹೆಸರುಗಳನ್ನು ಅಂತಿಮ ತೀರ್ಪಿನ ನಂತರ ಸೇರಿಸಿದರೆ... ಮತ ಚಲಾಯಿಸಲು ಅವಕಾಶ - ಸುಪ್ರೀಂ
ಹಿರಿಯ ಗಾಯಕಿ ಆಶಾ ಬೋಸ್ಲೆ ನಿಧನ : ಪ್ರಧಾನಿ ಮೋದಿ ಸಂತಾಪ
ಹಿರಿಯ ಗಾಯಕಿ ಆಶಾ ಬೋಸ್ಲೆ ನಿಧನ : ಪ್ರಧಾನಿ ಮೋದಿ ಸಂತಾಪ
 ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅನುಮೋದನೆ
ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅನುಮೋದನೆ
ನಾಸಿಕ್ ಟಿಸಿಎಸ್ ಪ್ರಕರಣ: ಮತಾಂತರ, ಮೂಲಭೂತೀಕರಣ ಆರೋಪಗಳ ಮೇಲೆ ತನಿಖೆ ಆರಂಭ
ನಾಸಿಕ್ ಟಿಸಿಎಸ್ ಪ್ರಕರಣ: ಮತಾಂತರ, ಮೂಲಭೂತೀಕರಣ ಆರೋಪಗಳ ಮೇಲೆ ತನಿಖೆ ಆರಂಭ
ದೋಷಾರೋಪಣೆ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ
ದೋಷಾರೋಪಣೆ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ
2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಕರ್ನಲ್ ಪುರೋಹಿತ್‌ಗೆ ಬ್ರಿಗೇಡಿಯರ್ ಬಡ್ತಿಗೆ ಅನುಮತಿ
2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಕರ್ನಲ್ ಪುರೋಹಿತ್‌ಗೆ ಬ್ರಿಗೇಡಿಯರ್ ಬಡ್ತಿಗೆ ಅನುಮತಿ
ಪ್ರತಿಯೊಬ್ಬ ಸೈನಿಕ ಡ್ರೋನ್ ಹಾರಿಸಲು ಸಿದ್ದವಾಗಬೇಕು - ಪ್ರತಿ ಸೈನಿಕನಿಗೆ ಡ್ರೋನ್ ಒದಗಿಸಲು ಸೇನಾ ಮುಖ್ಯಸ್ಥರು
ಪ್ರತಿಯೊಬ್ಬ ಸೈನಿಕ ಡ್ರೋನ್ ಹಾರಿಸಲು ಸಿದ್ದವಾಗಬೇಕು - ಪ್ರತಿ ಸೈನಿಕನಿಗೆ ಡ್ರೋನ್ ಒದಗಿಸಲು ಸೇನಾ ಮುಖ್ಯಸ್ಥರು
ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ ಶಿಕ್ಷೆ ವಿಧಿಸಿದ ಬೆಂಗಳೂರು ನ್ಯಾಯಾಲಯ
ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ ಶಿಕ್ಷೆ ವಿಧಿಸಿದ ಬೆಂಗಳೂರು ನ್ಯಾಯಾಲಯ

ನ್ಯೂಸ್ MORE NEWS...